ಸಂತರ ಮೂಲಕ ತನ್ನ ದುರಾದೃಷ್ಟ ನಿವಾರಣೆಯಾಗಬಹುದು ಎಂದು ನತದೃಷ್ಟ ವ್ಯಕ್ತಿ ಸಂತ ಇರುವ ಕಡೆ ಹೊರಟ. ದಾರಿಯಲ್ಲಿ ಒಂದು ದೊಡ್ಡ ಮರ ಎದುರಾಗಿತ್ತು. ಅದರ ಎಲೆಗಳೆಲ್ಲಾ ಬಾಡಿ ಉದುರಿ ಹೋಗಿತ್ತು. ನಂತರ ರೈತನೊಬ್ಬ ಸಿಕ್ಕಿದ್ದ. ಇನ್ನು ಮುಂದಕ್ಕೆ ಹೋದಾಗ ಸಂಕಟ ಪಡುತ್ತಿದ್ದ ನರಿ ಸಿಕ್ಕಿತ್ತು. ಇಲ್ಲಿ ಮರ, ರೈತ, ನರಿ ತಮ್ಮ ಕಷ್ಟ ನಿವಾರಣೆಗೆ ಸಂತರ ಬಳಿ ಪರಿಹಾರ ಕೇಳಿ ಎಂದಿದ್ದವು.