ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹುಡುಕಿ, ಬಲವಂತವಾಗಿ ಸ್ವರ್ಗಕ್ಕೆ ಕರೆದೊಯ್ದ. ಅಲ್ಲಿ ಆ ಹುಳು ಮಾಡಿದ್ದೇನು? ಕರ್ಮಫಲಗಳ ಕುರಿತ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ